ಸಂದೇಶ್ ಕಂಬೈನ್ಸ್‌ನ ಮತ್ತೊಂದು ಚಿತ್ರ `ಮಿಸ್ಟರ್` ೪೨೦
Posted date: 19 Mon, Mar 2012 ? 09:36:41 AM

ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ನಿರ್ಮಿಸುತ್ತಿರುವ ‘ಮಿಸ್ಟರ್ ೪೨೦ ಚಿತ್ರ ಕಳೆದವಾರ ಶ್ರೀಕಂಠೀರವ ಸ್ಟುಡಿಯೋದಲ್ಲಿ ಆರಂಭವಾಯಿತು. ಗಣಪತಿಯ ಮೇಲೆ ಸೆರೆ ಹಿಡಿಯಲಾದ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಸಂದೇಶ್ ನಾಗರಾಜ್ ಅವರ ಮೊಮ್ಮಕ್ಕಳಾದ ಕುಮಾರಿ ಸುರಕ್ಷಾ ಆರಂಭಫಲಕ ತೋರಿದರೆ ವೈಶಾಖ್ ಕ್ಯಾಮೆರಾ ಚಾಲನೆ ಮಾಡಿದರು.
    ಸಂದೇಶ್ ಕಂಬೈನ್ಸ್ ಹತ್ತೊಂಭತ್ತನೇ ಕಾಣಿಕೆಯಾಗಿರುವ ಈ ಚಿತ್ರದ ನಾಯಕರಾಗಿ ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಪ್ರಣೀತಾ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಸಾಧುಕೋಕಿಲಾ ಮುಂತಾದವರಿದ್ದಾರೆ.
    ಪ್ರದೀಪ್‌ರಾಜ್ ನಿರ್ದೇಶನದ ಈ ಚಿತ್ರಕ್ಕೆ ಬಿ.ಎ.ಮಧು ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಆರ್.ಗಿರಿ ಅವರ ಛಾಯಾಗ್ರಹಣವಿದೆ. ಬೆಂಗಳೂರು ಸುತ್ತಮುತ್ತ ಅರವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ವಿಜಯ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed